Sunday 8 October 2023

ಮಂಗಳ!

 ಮಂಗಳಂ ಜಯ ಜಯ

 ಮಂಗಳಂ ಜಯ ಜಯ

 ಮಂಗಳಂ ಜಯ ಜಯ

ಮಹಾದೇವನಿಗೆ ।।ಪ।।

ಬನ್ನಿಯ ಎಲಿಯಾಗ 

ಹನ್ನೊಂದಾರುತಿ ಮಾಡಿ

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೧।।

ಆಳದ ಎಲಿಯಾಗ 

ಅರವತ್ತೊಂದ ಏಡಿ ಮಾಡಿ 

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೨।।

ನಿಂಬಿಯ ಎಲಿಯಾಗ 

ತುಂಬಿದಾರುತಿ ಮಾಡಿ 

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೩।।

----------------------------------------------

----------------------------------------------

ಕರ್ಪೂರಾರುತೀ ಬೆಳಗಿರೆ 

ಕಾರುಣ್ಯ ಮೃಗಾಹಾರ ದೇವಗೆ 

ನೀಲಕಂಠನ ನಿಜಮಗೋಚರ 

ಭಾಲಚಂದ್ರ ಭರಣಗೆ ।।ಪ|| 

ಬಾಲೆಗೊಲಿದನು ಹಾಲಸವಿದನು 

ಲೋಲ ಶ್ರೀ ಗುರುರಾಯಗೆ ।।೧।।

ವಾರಿಜೋದ್ಭವ ಶಿರವ ಹರಿದನು 

ಮದಹರ ಮಹಾದೇವಗೆ 

ಘೋರ ತಾಪವ ದೂರಮಾಡುವ 

ಶೂರ ಷಣ್ಮುಕ ನಯ್ಯಗೆ ।।೨।।

ಶರಣು ಜನಕೆ ವರವನಿತ್ತನು 

ಪರಮ ಪಾರ್ವತಿ ಅರಸಗೆ 

ಧರೆಯೊಳಗೆ ಅಧಿಕವಾದ 

ಸೊನ್ನದ ಸಿದ್ಧರಾಮಗೆ ।।೩।।


ಓಂ ಚೈತನ್ಯಮ್ ಶಾಶ್ವತಂ ಉಮಾತೀತಂ ನಿರಂಜನಂ 

ನಾಗಬಿಂದು ಕಾಲಾತೀತಂ ತಸ್ಮೈಶ್ರೀ ಗುರುವೇ ನಮಃ ।।    

----------------------------------------------

----------------------------------------------

ಜ್ಞಾನಪೂರಣಂ ಜಗಜ್ಯೋತಿ 
ನಿರ್ಮಲವಾದ ಮನವೇ ಕರ್ಪೂರಾರುತೀ ।।ಪ।।

ಅನುದಿನ ಗುರುವಿನೊಳನುಗೂಡಿ ಭಕ್ತಿಯಲಿ 
ಜನನ ಮರಣರಹಿತ ಜಂಗಮಕೆ ಬೆಳಗಿರೆ ।।೧।।

ನಾನೀನೆಂಬುದ ಬೀಡೀರಿ 
ಸದ್ಗುರು ಪ್ರಾಪ್ತಿಗಿ ಜ್ಞಾನಿಗಳೊಡನಾಡಿರಿ 
ಸ್ವಾನುಭವದ ಸುಖ ತಾನೇ ಕೈ ಸೇರುವುದು 
ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರೆ ।।೨।।

ನಾನಾ ಜನ್ಮದ ಕತ್ತಲೆ 
ಕಳೆದಳಿದು ಬೇಗ 
ಮಾನವ ಜನ್ಮದ ಬೆಳಕಿನಲಿ 
ಹೀನ ವಿಷಯದಾಸೆ ಹಿಂದುಳಿದು ಗುರುವಿನ 
ಧ್ಯಾನವೇ ಗತಿಯೆಂದು ಮನವೊಪ್ಪಿ ಬೆಳಗಿರೆ ।।೩।।

ಅಷ್ಟವರ್ಣದ ಸ್ಥೂಲವು ಮಾನವ ಜನ್ಮ 
ಹುಟ್ಟಿ ಬರುವದು ದುರ್ಲಭವು 
ಕೋಟ್ಟಾನೆ ಗುರು ಎನಗೆ ಮುಟ್ಟಿದ ಫಲದಿಂದ 
ಹುಟ್ಟಿದ ಮಗ ಸಿದ್ಧನ ಹೆಸರಿಟ್ಟು ಬೆಳಗಿರೆ ।।೪।।
 
----------------------------------------------

----------------------------------------------







 

Monday 2 October 2023

ವರವ ಪಾಲಿಸೆ ತಾಯಿ ಉಧೋ ಎಲ್ಲಮ್ಮ

 ವರವ ಪಾಲಿಸೆ ತಾಯಿ ಉಧೋ ಎಲ್ಲಮ್ಮ 

ಕರವ ಮುಗಿದು ಬೇಡುವೆ ನಿನಗೆ ಉಧೋ ಎಲ್ಲಮ್ಮ ।।ಪ|| 

ನೀರು ಮೀಸಲೇ ನಿನಗ ಹೂವ ಮೀಸಲೇ 

ನೀರು ಎಂದರೆ ಕಪ್ಪಿ ಎಂಜಲ 

ಹೂವ ಎಂದರೆ ಹುಳದ ಎಂಜಲ 

ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೧।।

ಕಾಯಿ ಮೀಸಲೇ ನಿನಗ ಕರ್ಪೂರ ಮೀಸಲೇ  

ಕಾಯಿ ಎಂದರೆ ಕಲ್ಲಿನ ಎಂಜಲ 

ಕರ್ಪೂರ ಎಂದರೆ ಬೆಂಕಿ ಎಂಜಲ 

ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೨।।

ಏಡೆಯ ಮೀಸಲೇ ನಿನಗ ಮನವ ಮೀಸಲೇ 

ಏಡೆ ಎಂದರೆ ಎಲೆಯ ಎಂಜಲ 

 ಮನ ಎಂದರೆ ಪಾಪದ ಎಂಜಲ 

ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೩।।

ಹಾಲು ಮೀಸಲೇ ನಿನಗ ತುಪ್ಪ ಮೀಸಲೇ 

ಹಾಲು ಎಂದರೆ ಹೆಪ್ಪಿನ ಎಂಜಲ 

ತುಪ್ಪ ಎಂದರೆ ಉಪ್ಪಿನ ಎಂಜಲ 

ಯಾವುದು ಮೀಸಲೇ ನಿನಗ ಯಾವುದು ಮೀಸಲೇ ।।೪।।

ಗುಡ್ಡಕ ಬಂದೇನೇ ನಿನ್ನ ಪಾದಕ ಬಿದ್ದೇನೇ 

ಪಾಪವ ಮಾಡಿದ ಪಾಮರ ನಾನು 

ನರಕದಿ ಬಿದ್ದು ಕೊರಗುತಲಿರುವೆ ಉಧ್ದಾರ ಮಾಡೇ

ತಾಯಿ ಉಧ್ದಾರ ಮಾಡೇ ।।೫।।

Sunday 1 October 2023

ದೇವರೀಗ ಹೋಗೋಣು ಬಾರಮ್ಮ

 ದೇವರೀಗ ಹೋಗೋಣು  ಬಾರಮ್ಮ 

ಯಾರ ಗೊಡವಿ  ನಮಗೇನಮ್ಮ ।।ಪ।।

ಎಣ್ಣೆ ಪಣತೆ ಪತ್ರಿ  ಜೋಡಮ್ಮ 

ಜ್ಯೋತಿ  ಇರುವ ಮನೆ ಲೇಸಮ್ಮ ।।೧।।

ನೂರಾರು ದಿನದ ಸಂತೆಮ್ಮ 

ಸಂತಿಯ  ತಲಿಮ್ಯಾಲ  ಕುಂತೆಮ್ಮ ।।೨।।

ವಸುಧೆಯೋಳು ನಮ್ಮ ಶಿಶುನಾಳ 

ಗುರುಗೋವಿಂದಜ್ಜನ  ನೆನೆಯಮ್ಮ ।। ೩।।

ಸೋತು ನಡೇವ ಸೊಸೆಯು ಚಂದ

 ಸೋತು ನಡೇವ  ಸೊಸೆಯು ಚಂದ 

ಅಪ್ಪಿಕೊಂಡು ಆನಂದ ಪಡುವ ಅತ್ತಿ ಮಾವ ಚಂದ ।।ಪ|| 

ಸತ್ಯಶೀಲ ತಿಳುವಳಿಕುಳ್ಳ ಪುತ್ರನು ಚಂದ 

ಅಕ್ಕ ಮಹಾದೇವಿಯ ವಚನವು ಚಂದ ।।೧।।

ಚನ್ನಮಲ್ಲಿಕಾರ್ಜುನ ದೇವಾ 

ನಿಮ್ಮ ಸೇವೆಯು ಚಂದ ।।೨।।

ರಂಗಯ್ಯ ಬಾರೋ ನಮ್ಮ ಮನೆಗೇ

 ರಂಗಯ್ಯ ಬಾರೋ ನಮ್ಮ ಮನೇಗೇ  ।।ಪ|| 

ತಂದೆಗೆ ನೋರೆ ಹಾಲು ತಂದೇನಿ ನೀ ಬಾರೋ 

ಕುಡಿದು ಮಂಚದ ಮೇಲೆ ಮಲಗು ಬಾ ।।೧।।

ರಂಗಯ್ಯ ಬಾರೋ ನಮ್ಮ ಮನೇಗೇ

ಬೆಣ್ಣಿ ತಂದೇನಿ ಬಾರೋ ಅನ್ನವ ಮಿಕ್ಕುವಂತಃ 

ಉಂಡು ಮಂಚದ ಮೇಲೆ ಮಲಗು ಬಾ ।।೨।।

ರಂಗಯ್ಯ ಬಾರೋ ನಮ್ಮ ಮನೇಗೇ

ದೇಶದೊಳಗ ನಮ್ಮ ವಾಸುಳ್ಳ ಪಂಢರಪುರ 

ತಂದೆ ಶ್ರೀ ಪುರಂದರ ವಿಠಲರಾಯ ।।೩।।

ಬಾರೋ ನಮ್ಮ ಮನೇಗೇ

ಕುಮಾರ ನೀ ಸುಮಾರ

 ಸುಮಾರ ನೀ ಸುಮಾರ, ಕುಮಾರ ನೀ ಸುಮಾರ 

ಮಾನವ ಜನ್ಮಕ ಬಂದು ಸುಪುತ್ರ ನಾದಮ್ಯಾಲ

ಕುಮಾರ ನೀ ಸುಮಾರ ।ಪ|| 

ಹಿರಿಯರಿಲ್ಲದ ಮನೆ ಸುಮಾರ 

ಗುರುವಿಲ್ಲದ ಮಠ ಸುಮಾರ ।।೧।।

ಮಾತು ಕೇಳದ ಮಗ ಸುಮಾರ 

ರೀತಿ ಬಿಟ್ಟು ನಡೇವ ಸೋಸಿ ಸುಮಾರ ।।೨।।

ಹಣ್ಣು ಇಲ್ಲದ ವನ ಸುಮಾರ 

ಹೆಣ್ಣು ಇಲ್ಲದ ಮನೆ ಸುಮಾರ ।।೩।।


ಉಳವಿಯ ಬಸವಣ್ಣ

 ಉಳವಿಯ ಬಸವಣ್ಣ ಉಳಿಯೋ ನಮ್ಮನಿಯಾಗ 

ನೀರ ಕಾದಾವೀಗ ಜಳಕಕ ನೀರ ಕಾದಾವೀಗ ।।ಪ।।

ನೀರನೇ ಕಾದಾವೋ ಜಳಕಕ್ಕ ನಮ್ಮ ಬಸವ

ಹಾಲ ಕಾದವೀಗ ಕುಡಿಯಾಕ ಹಾಲ ಕಾದಾವೀಗ ।।೧।।

ಎಡಕ ಅಡಕಿಯ ವನ ಬಲಕ ಬಾಳೆಯ ಬನ 

ನಡಕ ನಮ್ಮ ಬಸವಣ್ಣ ನೆಲೆಸ್ಯಾನ ನಮ್ಮ ಬಸವಣ್ಣ ।।೨।।

ನಿಂಬಿಯ ಗಿಡ ಹುಟ್ಟಿ ಲಿಂಗಕ್ಕೆ ನೆರಳಾಗಿ 

ಬಂದ  ಜಂಗಮರೀಗೆ ಬಸವಣ್ಣ ಬಂದ  ಜಂಗಮರೀಗೆ ।।೩।।

ಬಸವಣ್ಣ ಹುಟ್ಟಲಿ ಹೊಸ ಪ್ಯಾಟೆ ಕಟ್ಟಲಿ 

ರಸಬಾಳೆಯ ಕಬ್ಬ ಚಿಗಿಯಲಿ ರಸಬಾಳೆಯ ಕಬ್ಬ ।।೪।।

ರಸಬಾಳಿ  ಕಬ್ಬ ಚಿಗಿಯಲು ಕಣಕಿಕೊಪ್ಪ 

ಬಸವಣ್ಣನ ತೇರ ಎಳೆಯಲಿ ಬಸವಣ್ಣನ ತೇರ ।।೫।।