Sunday 8 October 2023

ಮಂಗಳ!

 ಮಂಗಳಂ ಜಯ ಜಯ

 ಮಂಗಳಂ ಜಯ ಜಯ

 ಮಂಗಳಂ ಜಯ ಜಯ

ಮಹಾದೇವನಿಗೆ ।।ಪ।।

ಬನ್ನಿಯ ಎಲಿಯಾಗ 

ಹನ್ನೊಂದಾರುತಿ ಮಾಡಿ

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೧।।

ಆಳದ ಎಲಿಯಾಗ 

ಅರವತ್ತೊಂದ ಏಡಿ ಮಾಡಿ 

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೨।।

ನಿಂಬಿಯ ಎಲಿಯಾಗ 

ತುಂಬಿದಾರುತಿ ಮಾಡಿ 

ಅಣ್ಣ ಬಸವಣ್ಣಗ ಬೆಳಗಿದೆ ನಾ ।।೩।।

----------------------------------------------

----------------------------------------------

ಕರ್ಪೂರಾರುತೀ ಬೆಳಗಿರೆ 

ಕಾರುಣ್ಯ ಮೃಗಾಹಾರ ದೇವಗೆ 

ನೀಲಕಂಠನ ನಿಜಮಗೋಚರ 

ಭಾಲಚಂದ್ರ ಭರಣಗೆ ।।ಪ|| 

ಬಾಲೆಗೊಲಿದನು ಹಾಲಸವಿದನು 

ಲೋಲ ಶ್ರೀ ಗುರುರಾಯಗೆ ।।೧।।

ವಾರಿಜೋದ್ಭವ ಶಿರವ ಹರಿದನು 

ಮದಹರ ಮಹಾದೇವಗೆ 

ಘೋರ ತಾಪವ ದೂರಮಾಡುವ 

ಶೂರ ಷಣ್ಮುಕ ನಯ್ಯಗೆ ।।೨।।

ಶರಣು ಜನಕೆ ವರವನಿತ್ತನು 

ಪರಮ ಪಾರ್ವತಿ ಅರಸಗೆ 

ಧರೆಯೊಳಗೆ ಅಧಿಕವಾದ 

ಸೊನ್ನದ ಸಿದ್ಧರಾಮಗೆ ।।೩।।


ಓಂ ಚೈತನ್ಯಮ್ ಶಾಶ್ವತಂ ಉಮಾತೀತಂ ನಿರಂಜನಂ 

ನಾಗಬಿಂದು ಕಾಲಾತೀತಂ ತಸ್ಮೈಶ್ರೀ ಗುರುವೇ ನಮಃ ।।    

----------------------------------------------

----------------------------------------------

ಜ್ಞಾನಪೂರಣಂ ಜಗಜ್ಯೋತಿ 
ನಿರ್ಮಲವಾದ ಮನವೇ ಕರ್ಪೂರಾರುತೀ ।।ಪ।।

ಅನುದಿನ ಗುರುವಿನೊಳನುಗೂಡಿ ಭಕ್ತಿಯಲಿ 
ಜನನ ಮರಣರಹಿತ ಜಂಗಮಕೆ ಬೆಳಗಿರೆ ।।೧।।

ನಾನೀನೆಂಬುದ ಬೀಡೀರಿ 
ಸದ್ಗುರು ಪ್ರಾಪ್ತಿಗಿ ಜ್ಞಾನಿಗಳೊಡನಾಡಿರಿ 
ಸ್ವಾನುಭವದ ಸುಖ ತಾನೇ ಕೈ ಸೇರುವುದು 
ಅನುಭವಿಸಿ ಲಿಂಗಕ್ಕೆ ಮನವೊಪ್ಪಿ ಬೆಳಗಿರೆ ।।೨।।

ನಾನಾ ಜನ್ಮದ ಕತ್ತಲೆ 
ಕಳೆದಳಿದು ಬೇಗ 
ಮಾನವ ಜನ್ಮದ ಬೆಳಕಿನಲಿ 
ಹೀನ ವಿಷಯದಾಸೆ ಹಿಂದುಳಿದು ಗುರುವಿನ 
ಧ್ಯಾನವೇ ಗತಿಯೆಂದು ಮನವೊಪ್ಪಿ ಬೆಳಗಿರೆ ।।೩।।

ಅಷ್ಟವರ್ಣದ ಸ್ಥೂಲವು ಮಾನವ ಜನ್ಮ 
ಹುಟ್ಟಿ ಬರುವದು ದುರ್ಲಭವು 
ಕೋಟ್ಟಾನೆ ಗುರು ಎನಗೆ ಮುಟ್ಟಿದ ಫಲದಿಂದ 
ಹುಟ್ಟಿದ ಮಗ ಸಿದ್ಧನ ಹೆಸರಿಟ್ಟು ಬೆಳಗಿರೆ ।।೪।।
 
----------------------------------------------

----------------------------------------------







 

No comments:

Post a Comment